ರಾಜ್ಯದ ಜನತೆಗೆ ಕಳೆದ 2 ವರ್ಷಗಳಿಂದ ನಿರಂತರ ಸೇವೆಯಲ್ಲಿ ಮೆಡಿಕವರ ಆಸ್ಪತ್ರೆ ಬೆಂಗಳೂರು ಅತ್ಯಂತ ಆಧುನಿಕ ತಂತ್ರಜ್ಞಾನ ರೋಬೋಟಿಕ್ ಸೇರಿದಂತೆ ನುರಿತ ವೈದ್ಯರಿಂದ ದಿನದ 24 ಗಂಟೆ ಸೇವೆಯಲ್ಲಿದೆ ಎಂದು ಕೃಷ್ಣಮೂರ್ತಿರವರು ತಿಳಿಸಿದ್ದಾರೆ.
ಮುಳಬಾಗಿಲಿನಲ್ಲಿ ಮೆಡಿಕವರ್ ಆಸ್ಪತ್ರೆ ಬೆಂಗಳೂರು ವತಿಯಿಂದ ನಗರದ ಹೊರವಲಯದಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸುದ್ದಿಗೋಷ್ಟಿ ನಡೆಸಿದ್ದಾರೆ.
ಮೆಡಿಕವರ್ ಆಸ್ಪತ್ರೆ ಮುಖ್ಯಸ್ಥರಾದ ಕೃಷ್ಣಮೂರ್ತಿ ಮಾತನಾಡಿ ಇದು ಮೂಲತಹ ಮೆಡಿಕವರ್ ಆಸ್ಪತ್ರೆ ಯೂರೋಪ್ ದೇಶದಲ್ಲಿ ಪ್ರಾರಂಭವಾಗಿ ಇಂದು ವಿಶ್ವದ ಹತ್ತು ಹಲವು ದೇಶಗಳಲ್ಲಿ ಜನರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿದ್ದು ಬೆಂಗಳೂರಿನಲ್ಲಿಯೂ ಸಹ ತಮ್ಮದೇಯಾದ ಶಾಖೆಯನ್ನು ಹೊಂದಿದ್ದು ರಾಜಧಾನಿ ಬೆಂಗಳೂರಿನಲ್ಲಿರುವ ಮೆಡಿಕವರ್ ಆಸ್ಪತ್ರೆ ಹಲವಾರು ವಿಶೇಷತೆಗಳನ್ನು ಹೊಂದಿದೆ. ದಿನದ 24 ಘಂಟೆ ನಿರಂತರ ಸೇವೆ ಅತ್ಯಂತ ನುರಿತ ವ?ಧ್ಯರು ಜೊತೆಗೆ ಅತ್ಯಾಧುನಿಕ ರೋಬೋಟ್ ಚಿಕಿತ್ಸೆಯನ್ನು ಸಹ ನೀಡುತ್ತಿದ್ದು ನಾಗರೀಕರ ನಂಬಿಕೆ ಅತ್ಯಂತ ಪಾತ್ರವಾಗಿದ್ದು ಕಳೆದ 2 ವರ್ಷಗಳಿಂದ ರಾಜ್ಯದ ಜನರ ಆರೋಗ್ಯ ಸಮಸ್ಯೆಗಳಿಗೆ ದಾರಿದೀಪವಾಗಿ ಸಾಗುತ್ತಿದ್ದು ಅತ್ಯಂತ ಗುಣಮಟ್ಟ,ಅತ್ಯಂತ ದೊಡ್ಡದಾದ ಎಮರ್ಜೆನ್ಸಿ ವಾರ್ಡ್ ಗಳು, ನೂರಕ್ಕೂ ಹೆಚ್ಚಿನ ನುರಿತ ವೈದ್ಯರ ಸೇವೆ ನೀಡುತ್ತಿದ್ದು, ಕೇವಲ ಒಂದು ಗಂಟೆ ಅವಧಿಯಲ್ಲಿ ಆಸ್ಪತ್ರೆಯ ಸೇವೆಯನ್ನ ಮುಳಬಾಗಿಲು ತಾಲೂಕಿನ ಜನತೆ ಪಡೆಯಬಹುದು.
ಮುಖ್ಯವಾಗಿ ಹಾರ್ಟ್ ಅಟಾಕ್, ಸ್ಟೋಕ್, ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆಗಳು ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ವಿಶೇಷವಾದ ನಂಬಿಕೆಗೆ ಅರ್ಹವಾದ ರೀತಿಯಲ್ಲಿ ಮೆಡಿಕವರ್ ಆಸ್ಪತ್ರೆ ಸಾಗುತ್ತಿದೆ ಎಂದರು. ಆರೋಗ್ಯವೇ ಪ್ರತೀ ಮನುಷ್ಯ ಸೌಭಾಗ್ಯ ಜೊತೆಗೆ ಸರ್ಕಾರ ವಿವಿಧ ಆರೋಗ್ಯ ಸೇವೆಗಳು ಖಾಸಗಿ ಕಂಪನಿಗಳ ಸೇವೆಗಳನ್ನು ನೀಡುತ್ತಿದ್ದು ಎಲ್ಲಾ ರೀತಿಯ ಸಮುದಾಯದ ಜನರು ನಂಬಿಕೆ ಇಂದ ಆಸ್ಪತ್ರೆಯ ಸೇವೆ ಪಡೆಯ ಬಹುದು ಜೊತೆಗೆ ಎಲ್ಲಾ ರೀತಿಯ ವಿಮೆಗೆ ಸಂಬಂದಿಸಿದ ಸೇವೆಗಳನ್ನು ಪಡೆಯಬಹುದು. ಇನ್ನು ಶೇಕಡಾ ನೂರರಷ್ಟು ಹಣ ರಹಿತ ಸೇವೆಯನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮೆಡಿಕವರ್ ಆಸ್ಪತ್ರೆ ನುರಿತ ವಿವಿಧ ವೈಧ್ಯರ ಸೇವೆಗಳನ್ನು ಗ್ರಾಮಾಂತರ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮುಂದೆ ಬರಲಿದ್ದು ಇದಕ್ಕೆ ಇತರೆ ಆಸ್ಪತ್ರೆಯ ಸಹಕಾರದೊಂದಿಗೆ ನೀಡುವ ಭರವಸೆಯನ್ನು ತಿಳಿದರು. ನಮ್ಮ ಆಸ್ಪತ್ರೆಯಲ್ಲಿ ಮತ್ತೊಂದು ವಿಶೇಷ ಸೇವೆ ಎಂದರೆ ಆಂಬುಲೆನ್ಸ್ ಸೇವೆ ನಮ್ಮ ಆಸ್ಪತ್ರೆಯ ಆಂಬುಲೆನ್ಸ್ ಗಳು ಯಾವುದೇ ರೀತಿಯ ಎಮರ್ಜೆನ್ಸಿ ಸ್ಥಿತಿಯನ್ನು ಬಡಿಸುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು ಗರಿಷ್ಠ ಪ್ರಮಾಣದಲ್ಲಿ ನಮ್ಮ ಸೇವೆಯನ್ನು ನೀಡಲಾಗುತ್ತಿದ್ದು ಬೆಂಗಳೂರಿಗೆ ಬಹಳಷ್ಟು ಸಮೀಪದಲ್ಲಿ ಇರುವಂತಹ ಪ್ರದೇಶದ ಸಾರ್ವಜನಿಕರು ಇದರ ಒಂದು ಸದುಪಯೋಗವನ್ನು ಪಡೆಸಿಕೊಳ್ಳಲು ವಿನಂತಿಸಿದರು.

ಈ ಸಂದರ್ಭದಲ್ಲಿ ಮಿಡಿಕವರ್ ಆಸ್ಪತ್ರೆಯ ಹಿರಿಯ ಹಾಗೂ ನುರಿತ ವೈದ್ಯರಾದ ಡಾ. ದಿಲೀಪ್ ಮಾತನಾಡಿ ನಮ್ಮ ಆಸ್ಪತ್ರೆಯಲ್ಲಿ ಈಗಾಗಲೇ ತಿಳಿಸಿರುವಂತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು ಹೃದಯ ಚಿಕಿತ್ಸೆ, ಸ್ಟೋಕ್, ಕಿಡ್ನಿ ಸಮಸ್ಯೆಗಳು, ಡಯಾಲಿಸಿಸ್, ಕಿಡ್ನಿ ಕಸಿ ಸೇರಿದಂತೆ ಅತ್ಯಂತ ತೀಕ್ಷ್ಮವಾದ ಆರೋಗ್ಯ ಸಮಸ್ಯೆಗಳಿಗೆ ಅತ್ಯುತ್ತಮವಾದ ಚಿಕಿತ್ಸೆಯನ್ನು ಮೆಡಿಕವರ್ ಆಸ್ಪತ್ರೆ ನೀಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೆಡಿಕವರ್ ಆಸ್ಪತ್ರೆ ಬೆಂಗಳೂರು ಶಾಖೆಯ ಮುಖ್ಯಸ್ಥರಾದ ಕೃಷ್ಣಮೂರ್ತಿ, ಮೂತ್ರಪಿಂಡ ತಜ್ಞರು ಡಾ. ದಿಲೀಪ್ (ಎಂಬಿಬಿಎಸ್ ಎಂಎಸ್ ಎಂ ಸಿ ಹೆಚ್ ), ಡಾಕ್ಟರ್ ವಂಶಿಕೃಷ್ಣ ಸರ್ಜನ್ ಎಂಬಿಬಿಎಸ್, ಎಂಎಸ್, ರೋಬೋಟಿಕ್ ಸರ್ಜನ್, ಮುರಳಿಗೆ ಮಾರ್ಕೆಟಿಂಗ್ ಹೆಡ್, ಜಿ ಸತ್ಯನಾರಾಯಣ ಮಾರ್ಕೆಟಿಂಗ್ ಮ್ಯಾನೇಜರ್, ರಾಘವೇಂದ್ರ ಸಹಾಯಕ ವ್ಯವಸ್ಥಾಪಕರು ಕೋಲಾರ ಜಿಲ್ಲೆ. ಭಾಗವಹಿಸಿದ್ದರು.





Leave a Reply