ದೇಶಾದ್ಯಂತ ಈ ವರ್ಷದ ಖಾರಿಫ್ ಬಿತ್ತನೆ ಪ್ರದೇಶ ಜೂನ್ 25ರ ವೇಳೆಗೆ 1.827 ಕೋಟಿ ಹೆಕ್ಟೇರ್ಗೆ ಇಳಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಕುಸಿತ ದಾಖಲಾಗಿದೆ. ಐಐಟಿ ಗಾಂಧಿನಗರ ನಿರ್ವಹಿಸುವ ರಾಷ್ಟ್ರೀಯ ಬರ ನಿಗಾ ವ್ಯವಸ್ಥೆಯ ಪ್ರಕಾರ, ಜುಲೈ 1ರ ವೇಳೆಗೆ ದೇಶದ ಶೇ.41.2ರಷ್ಟು ಪ್ರದೇಶ ಬರ ಅಥವಾ ಬರದಂಚಿನ ಸ್ಥಿತಿಯಲ್ಲಿದೆ.
ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದ ಕೆಲ ಭಾಗಗಳು ಹೆಚ್ಚು ಬಾಧಿತವಾಗಿದ್ದು, ಈ ಪ್ರದೇಶಗಳ ಶೇ.71ರಷ್ಟು ಭಾಗ ಬರದ ವ್ಯಾಪ್ತಿಯಲ್ಲಿದೆ. ಕೇಂದ್ರ ಕೃಷಿ ಸಚಿವಾಲಯ 300ಕ್ಕೂ ಹೆಚ್ಚು ಜಿಲ್ಲೆಗಳನ್ನು ಮಳೆ ಕೊರತೆಗೆ ದುರ್ಬಲ ಎಂದು ಗುರುತಿಸಿದೆ.

Leave a Reply