ಪೆಸಿಫಿಕ್ ಸಾಗರದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೈ ಉಷ್ಣಾಂಶ ಹೆಚ್ಚಳವಾಗುವ ಎಲ್ ನೀನೋ ವಿದ್ಯಮಾನ ಬಲಗೊಳ್ಳುತ್ತಿದ್ದು, ಇದು ಭಾರತದತ್ತ ತೇವಾಂಶ ಸಾಗಿಸುವ ಮಾರುತಗಳನ್ನು ದುರ್ಬಲಗೊಳಿಸುತ್ತದೆ ಎಂದು ಹವಾಮಾನ ತಜ್ಞರು ವಿವರಿಸಿದ್ದಾರೆ. ಈ ವಿದ್ಯಮಾನ ನೇರವಾಗಿ ಭಾರತದ ಭೂಭಾಗವನ್ನು ಸ್ಪರ್ಶಿಸದಿದ್ದರೂ, ದೇಶದ ಮುಂಗಾರಿನ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ.
1951ರಿಂದ ಈಚಿನ ಅಂಕಿಅಂಶಗಳ ಪ್ರಕಾರ, ಮಧ್ಯಮದಿಂದ ತೀವ್ರ ಎಲ್ ನೀನೋ ಸಂಭವಿಸಿದ 15 ವರ್ಷಗಳ ಪೈಕಿ 11 ವರ್ಷಗಳಲ್ಲಿ ಭಾರತದ ಕೃಷಿ ಉತ್ಪಾದನೆ ಕುಸಿದಿದೆ ಎಂದು ಐಸಿಆರ್ಐಇಆರ್ ಸಂಸ್ಥೆಯ ಅಧ್ಯಯನ ತಿಳಿಸಿದೆ. ಈ ಬಾರಿಯೂ ಇದೇ ಮಾದರಿ ಪುನರಾವರ್ತನೆಯಾಗದಂತೆ ಜಲ ಸಂರಕ್ಷಣೆ ಮತ್ತು ಬರ-ನಿರೋಧಕ ಬೆಳೆ ತಳಿಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

Leave a Reply